6ನೇ ಜನವರಿ ಪ್ರಚಲಿತ ಘಟನೆಗಳು
 
ರಾಷ್ಟ್ರೀಯ
1. ವರ್ಟಿಕಲ್ ಫಾರ್ಮಿಂಗ್:
ವರ್ಟಿಕಲ್ ಫಾರ್ಮಿಂಗ್: ಗೆ ಚಿತ್ರದ ಫಲಿತಾಂಶ
  • ನಗರೀಕರಣದ ಫಲವಾಗಿ ದೇಶದಲ್ಲಿ ಬೇಸಾಯ ಭೂಮಿ ಸಂಕುಚಿತಗೊಳ್ಳುತ್ತಿದೆ. ಕೃಷಿಭೂಮಿ ಕ್ಷೀಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಸಮಸ್ಯೆ ಎದುರಾಗಿದೆ. ಇದಕ್ಕೆ ಹೊಸ ಪರಿಹಾರವಾಗಿ ವರ್ಟಿಕಲ್ ಫಾರ್ಮಿಂಗ್' ಎಂಬ ಪದ್ದತಿ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.
ವರ್ಟಿಕಲ್ ಫಾರ್ಮಿಂಗ್ ಎಂದರೇನು?
  • ಹಸಿರುಮನೆಗಳ ನಿಯಂತ್ರಿತ ವಾತಾವರಣದಲ್ಲಿ ಖನಿಜಪೂರಿತ ನೀರನ್ನು ಬಳಸಿ ಲಂಬ ರೀತಿಯಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವ ಪದ್ಧತಿಗೆ ವರ್ಟಿಕಲ್ ಫಾರ್ಮಿಂಗ್ ಎಂದು ಕರೆಯಲಾಗುತ್ತದೆ.
  • ಭಾರತ ಸೇರಿದಂತೆ ಜಗತ್ತಿನ ಹಲವೆಡೆ ಈ ತಂತ್ರಜ್ಞಾನ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಸಾಮಾನ್ಯ ಕೃಷಿ ಪದ್ಧತಿಯಲ್ಲಿ ಬಳಸಲಾಗುವ ನೀರಿನ ಪ್ರಮಾಣವನ್ನೇ ವರ್ಟಿಕಲ್ ಫಾರ್ಮಿಂಗ್‌ನಲ್ಲೂ ಬಳಸಲಾಗುತ್ತದೆ.
  • ವಿಶ್ವಸಂಸ್ಥೆಯ ಎಫ್‌ಎಒ ( ಆಹಾರ ಮತ್ತು ಕೃಷಿ ಸಂಘಟನೆ) ಪ್ರಕಾರ, ಸಾಂಪ್ರದಾಯಿಕ ಕೃಷಿಗೆ ಹೋಲಿಸಿದರೆ ಲಂಬ ಕೃಷಿಯು ಶೇ. 75ರಷ್ಟು ಕಡಿಮೆ ಕಚ್ಚಾವಸ್ತುಗಳನ್ನು ಬೇಡುತ್ತದೆ.
ಭೂಪ್ರದೇಶದ ದೃಷ್ಟಿಯಿಂದ :
  • ಸಾಂಪ್ರದಾಯಿಕ ಕೃಷಿಯಲ್ಲಿ 72 ಚದರ ಮೀಟರ್ ಭೂ ಜಾಗದಲ್ಲಿ ಉತ್ಪಾದಿಸುವ ಆಹಾರ ಪ್ರಮಾಣವನ್ನು ವರ್ಟಿಕಲ್ ಫಾರ್ಮಿಂಗ್‌ನಲ್ಲಿ 6 ಚದರ ಮೀಟರ್ ಪ್ರದೇಶದಲ್ಲಿ ಬೆಳೆಯಬಹುದಾಗಿದೆ.
ಉಪಯೋಗ :
  • ವರ್ಟಿಕಲ್ ಫಾರ್ಮಿಂಗನಲ್ಲಿ ಸಸ್ಯಗಳನ್ನು ಒಳಾಂಗಣದಲ್ಲಿ ಮಣ್ಣಿನೊಂದಿಗೆ ಅಥವಾ ಮಣ್ಣಿಲ್ಲದೆಯೂ ಬೆಳೆಯಬಹುದಾಗಿದೆ. ಇದು ನಿರಂತರ ಮಳೆ, ಶುಷ್ಕ ವಾತಾವರಣದಿಂದ ಬೆಳೆಯನ್ನು ರಕ್ಷಿಸುತ್ತದೆ.
  • ಈ ಪದ್ಧತಿ ನಗರ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ. ವರ್ಟಿಕಲ್ ಫಾರ್ಮಿಂಗ್, ಹೈಡೋಫೋನಿಕ್ಸ್ ಮತ್ತು ಏರೋಪೋನಿಕ್ಸ್ ಎಂಬ ಎರಡು ಪ್ರಮುಖ ಕೃಷಿ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಸಾಂಪ್ರದಾಯಿಕ ಕೃಷಿಗಿಂತ ಇದರಲ್ಲಿ ಇಳುವರಿ ಹೆಚ್ಚಿರುತ್ತದೆ.
ಹೈಡ್ರೋಪೋನಿಕ್ಸ್, ಏರೋಪೋನಿಕ್ಸ್ :
  • ಹೈಡ್ರೋಪೋನಿಕ್ಸ್ ತಂತ್ರಜ್ಞಾನದಲ್ಲಿ ಪೋಷಕಾಂಶಗಳಿಂದ ತುಂಬಿದ ಬೇರುಗಳು ನೀರಿನಲ್ಲಿ ಮುಳುಗಿರುತ್ತವೆ. ತಂತ್ರಜ್ಞಾನದಲ್ಲಿ ಸಸ್ಯಗಳನ್ನು ಮುಚ್ಚಿದ ಅಥವಾ ಅರೆ-ಮುಚ್ಚಿದ ವಾತಾವರಣದಲ್ಲಿ ಪೋಷಕಾಂಶಗಳನ್ನು ಗಾಳಿಯಲ್ಲಿ ಸಿಂಪಡಿಸಲಾಗುತ್ತದೆ.
ಕಾರ್ಬನ್ ಪ್ರಿಂಟ್ :
  • ವಿಶ್ವದ ಐದು ಅತಿದೊಡ್ಡ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಕೃಷಿ ಮತ್ತು ಸಾರಿಗೆ ಸೇರಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾಠ್ಯಕ್ರಮದ (ಯುಎನ್‌ಇಪಿ) ಎಮಿಷನ್ ಗ್ಯಾಪ್ ರಿಪೋಟ್ 2019 ತಿಳಿಸಿದೆ.
  • ಮತ್ತೊಂದೆಡೆ ವರ್ಟಿಕಲ್ ಫಾರ್ಮಿಂಗ್ ನ ಕಾರ್ಬನ್ ಪ್ರಿಂಟ್ ತುಂಬಾ ಕಡಿಮೆ ಪ್ರಮಾಣದಲ್ಲದೆ ಎಂದು ವರದಿ ಹೇಳಿದೆ.
 ಭಾರತದ ಸ್ಥಿತಿ :
  • ಭಾರತದಲ್ಲಿ 2019ರಲ್ಲಿ ವರ್ಟಿಕಲ್ ಫಾರ್ಮಿಂಗ್ ಪದ್ದತಿಯನ್ನು ಪರಿಚಯಿಸಲಾಯಿತು. ಅದರೆ ಅದನ್ನು ಮಾರುಕಟ್ಟೆಗೆ ಪರಿಚಯಿಸುವ ಬಗ್ಗೆ ಇನ್ನೂ ಕೆಲಸಗಳು ನಡೆಯುತ್ತಿವೆ. ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ವರ್ಟಿಕಲ್ ಫಾರ್ಮಿಂಗ್  ಪದ್ದತಿ ಹೆಚ್ಚು ಜನಪ್ರಿಯವಾಗಿದೆ.
ಅಂತರ-ರಾಷ್ಟ್ರೀಯ
1. ಬಾಂಗ್ಲಾದೇಶದ ಮೊದಲ ಹಿಂದೂ ಜಡ್ಜ್ ಬಂಧನಕ್ಕೆ ಆದೇಶ:
ನ್ಯಾ. ಸುರೇಂದ್ರ ಕುಮಾರ್ ಸಿನ್ಹಾ ಗೆ ಚಿತ್ರದ ಫಲಿತಾಂಶ
  • ಸುಮಾರು 3 ಕೋಟಿ ರೂ. ಲಂಚ ಪಡೆದ ಆರೋಪದ ಮೇರೆಗೆ ಬಾಂಗ್ಲಾದೇಶದ ಮೊದಲ ಹಿಂದೂ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆ ಹೊಂದಿದ್ದ ನ್ಯಾ. ಸುರೇಂದ್ರ ಕುಮಾರ್ ಸಿನ್ಹಾ ವಿರುದ್ಧ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿದೆ.
2. ಕ್ರಿಸ್ಟಿನಾ ಕೊಚ್ :
ಕ್ರಿಸ್ಟಿನಾ ಕೊಚ್ ಗೆ ಚಿತ್ರದ ಫಲಿತಾಂಶ
  •  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಒಂದೇ ಪ್ರಯಾಣದಲ್ಲಿ ದೀರ್ಘಾವಧಿ ಕಳೆದ ಮಹಿಳಾ ಗಗನಯಾನಿ ಎಂಬ ಕೀರ್ತಿಗೆ ನಾಸಾದ ಗಗನಯಾತ್ರಿ ಕ್ರಿಸ್ಟಿನಾ ಕೋಚ್ ಪಾತ್ರರಾಗಿದ್ದಾರೆ.
3.ಜಗತ್ತಿನ ದೊಡ್ಡ ಹೂವು ಪತ್ತೆ:
ಜಗತ್ತಿನ ದೊಡ್ಡ ಹೂವು ಪತ್ತೆ: ಗೆ ಚಿತ್ರದ ಫಲಿತಾಂಶ
  • ಬಣ್ಣ ಬೃಹತ್ ದಳ, ದಳಗಳ ಮೇಲೆ ಬಿಳಿ ಬಿಳಿಯ ಗುಳ್ಳೆಯ ರೀತಿಯ ಚುಕ್ಕಿಗಳು ನೋಡಿದ ತಕ್ಷಣ ಸೆಳೆಯುವ ನೋಟ ಇಂತಹ ಸುಂದರ ಹೂವು ಈಗ ಇಂಡೋನೇಷ್ಯಾದ ಕಾಡಿನಲ್ಲಿ ಅರಳಿದೆ.
4. ಇರಾನ್‌ ಬಗ್ಗೆ ನಿಮಗೆಷ್ಟು ಗೊತ್ತು:
ಹೇಗೆನ್ನುತ್ತಾರೆ ಇರಾನ್‌ನಲ್ಲಿ!

  • ಹಲೋ ಎನ್ನುವುದನ್ನು ಸಲಾಂ ಎನ್ನುತ್ತಾರೆ.
  • ಪ್ಲಸ್ ಎನ್ನುವುದಕ್ಕೆ ಲೊಫನ್ ಎನ್ನುತ್ತಾರೆ.
  • ಥ್ಯಾಂಕ್ಯೂ ಎನ್ನುವುದಕ್ಕೆ ತಾಷಕೊರ್ ಎನ್ನುತ್ತಾರೆ.
  • ಯೆಸ್‌ಗೆ ಬಾಲೆ ಎಂದು ನೋ ಗೆ 'ನಾ' ಎಂದು ಕರೆಯುತ್ತಾರೆ.
ಜನಪ್ರಿಯ ವ್ಯಕ್ತಿಗಳು
  • ಶೈರಿನ್ ಎಬಾಡಿ: ನೊಬೆಲ್ ಪ್ರಶಸ್ತಿ ಪಡೆದವರು
  • ರೆಝಾ ಅಬ್ಬಾಸಿ: 1565-1935ರ ಕಾಲದ ಇವರು ಅಲ್ಲಿನ ಪ್ರಮುಖ ಚಿತ್ರಕಲಾವಿದ ಮತ್ತು ಕ್ಯಾಲಿಗ್ರಫರ್.
ಇರಾನ್‌ನ ಪ್ರಾಣಿಗಳು
  • ಏಷ್ಯಾಟಿಕ್ ಚೀತಾಗಳು (ಅಳಿವಿನಂಚಿನಲ್ಲಿವೆ)
  • ಒಂಟೆಗಳು, ಪರ್ಷಿಯನ್ ಚಿರತೆಗಳು
  • ಓಕ್ಸುಸ್ ಹಾವುಗಳು
  •  ಕ್ಯಾಸ್ಪಿಯನ್ ಸೀಲ್ (ನೀರುನಾಯಿ)
  • ಒಂದು ಕಾಲದಲ್ಲಿ ಇಲ್ಲಿ ಸಿಂಹಗಳು, ಹುಲಿಗಳು ಮತ್ತು ಇತರೆ ಬೃಹತ್ ಪ್ರಾಣಿಗಳು ಇದ್ದವು. ಆದರೆ, ಬೇಟೆಯಿಂದಾಗಿ ಇವು ಅಪರೂಪವಾಗಿ ಬಿಟ್ಟಿವೆ.
  •  ಇರಾನ್ ಏದ್ಯಾ ಖಂಡದ ಒಂದು ದೇಶ. 1935ರ ಮೊದಲು
ಶಿಖರಗಳ ನಾಡು
  • ವಿಶಾಲವಾದ ಮರುಭೂಮಿಗಳು, ಉಪ್ಪು ಹೊಂದಿರುವ ಪ್ರದೇಶಗಳು, ಮಳೆಕಾಡುಗಳನ್ನು ಹೊಂದಿದೆ. ಅತ್ಯಧಿಕ ಪರ್ವತಗಳನ್ನು ಹೊಂದಿರುವ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಇದು ಪ್ರಮುಖವಾಗಿದೆ.
ಇತಿಹಾಸ
  • ಜಗತ್ತಿನ ಪ್ರಮುಖ ಪುರಾತನ ದೇಶ. ಈ ದೇಶದ ಮೊದಲ ನಗರ ಸುಸಾವನ್ನು ಕ್ರಿ.ಪೂ. 3200ರಲ್ಲಿಯೇ ನಿರ್ಮಿಸಲಾಗಿತ್ತು.
  • ಕ್ರಿ.ಪೂ. 559ರಲ್ಲಿ ಪರ್ಷಿಯಾದ ಸಾಮ್ರಾಜ್ಯವು ಇರಾನ್‌ ಮಾತ್ರವಲ್ಲದೆ ಮೆಸಪೊಟಮಿಯಾ, ಈಜಿಪ್ಟ್, ಮೆಡಿಟೇರಿಯನ್ ಸಾಗರದವರೆಗೂ ವ್ಯಾಪಿಸಿತ್ತು. ಜಗತ್ತಿನ ಪುರಾತನ ಸಾಮಾಜ್ಯಗಳಲ್ಲಿ ಇದು ಪ್ರಮುಖವಾಗಿದೆ.
  • ರಾಜಧಾನಿ – ತೆಹ್ರಾನ್
  • ಪ್ರಮುಖ ನಗರ: ಮಷಾಹದ್, ಈಸಫಾನ್
  • ಕರೆನಿ: ರಿಯಲ್ (ಐಆರ್‌ಆರ್)
  • ಆಡಳಿತ ಭಾಷೆ :ಪರ್ಷಿಯನ್ (ಪಾರ್ಸಿ)
  • ಪ್ರಮುಖ ಧರ್ಮ: ಇಸ್ಲಾಂ
ಆರ್ಥಿಕ
1. ರಾಜ್ಯಕ್ಕೆ ತೆರಿಗೆ ತಾಪತ್ರಯ:
  • ರಾಜ್ಯ ಸರ್ಕಾರ ವಿವಿಧ ಮೂಲಗಳಿಂದ ಸಂಗ್ರಹಿಸುವ ತೆರಿಗೆಗಳಲ್ಲಿ ವರ್ಷಾಂತ್ಯಕ್ಕೆ 2000 ಕೋಟಿ ರೂ. ಗಳ ತನಕ ಕೊರತೆ ಸಂಭವಿಸಬಹುದೆಂದು ಹಣಕಾಸು ಇಲಾಖೆ ಅಂದಾಜು ಮಾಡಿದೆ.
ಎಷ್ಟು ಕೊರತೆ:
  • ಸರ್ಕಾರ ಸ್ವಂತ ತೆರಿಗೆಗಳಿಂದ 1,01,744 ಕೋಟಿ ರೂ. ಸಂಗ್ರಹಣೆ ಉದ್ದೇಶ ಹೊಂದಿದ್ದು, ಈವರೆಗೆ 57,740 ಕೋಟಿರೂ. ಸಂಗ್ರಹವಾಗಿದೆ.
  • ಈ ಅಂದಾಜಿನಲ್ಲಿ ಲೆಕ್ಕಹಾಕಿ ದಾಗ 2000 ಕೋಟಿ ರೂ. ಕಡಿಮೆಯಾಗ ಬಹುದೆಂಬುದು ಆರ್ಥಿಕ ಇಲಾಖೆ ಮಾಡುತ್ತಿರುವ ಅಂದಾಜು. ತೆರಿಗೆ ಸಂಗ್ರಹಣೆಯ ಬೆಳವಣಿಗೆಯ ಪ್ರಮಾಣ ಶೇ. 5.2ಕ್ಕಿಂತ ಹೆಚ್ಚಾಗುತ್ತಿಲ್ಲ.
ಎಷ್ಟು ಕಡಿತ:
  • ಕೇಂದ್ರ ಸರ್ಕಾರ ನೀಡಬೇಕಾಗಿರುವ ತೆರಿಗೆ ಪಾಲಿನಲ್ಲಿ ಎಷ್ಟು ಕಡಿತ ಆಗಲಿದೆ ಎಂಬ ಅಂದಾಜು ರಾಜ್ಯ ಸರ್ಕಾರಕ್ಕೆ ಸಿಗುತ್ತಿಲ್ಲ.
  • ಲಭ್ಯ ಮಾಹಿತಿಯ ಪ್ರಕಾರ 5 ಸಾವಿರ ಕೋಟಿ ರೂ.ಗಳ ತನಕ ಕಡಿಮೆಯಾಗಬಹುದೆಂದು  ಹೇಳಲಾಗುತ್ತಿದೆ.
  • ಈಗ ಜಿಎಸ್‌ಟಿ ಪರಿಹಾರದ ಎರಡು ಕಂತು 7000 ಕೋಟಿ ರೂ. ಬಾಕಿ ಇದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಇದುವರೆವಿಗೂ ಆ ಬಗ್ಗೆ ಏನೇನು ಮಾಹಿತಿ ಇಲಾಖೆಗಳಿಗೆ ನೀಡಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ತೆರಿಗೆ ಸಂಗ್ರಹಣೆ ವಿವರ (ಕೋಟಿ ರೂ.ಗಳಲ್ಲಿ)
ಯಾವ ತೆರಿಗೆ ಗುರಿ ಆಗಬೇಕಾಗಿದ್ದು ಆಗಿರುವುದು
ಒಟ್ಟಾರೆ ಸ್ವಂತ ಸಂಪನ್ಮೂಲ 1.01.744 59350 57740
ವಾಣಿಜ್ಯ ತೆರಿಗೆ 58797 34290 34165
ಅಬಕಾರಿ ತೆರಿಗೆ 20950 12220 12631
ಮೋಟಾರ್ ವಾಹನ ತೆರಿಗೆ 7100 4141 3472
ನೋಂದಣಿ ಮುದ್ರಾಂಕ ತೆರಿಗೆ 11828 6899 6345
 
ಕ್ರೀಡೆ
1. ಅಲೌಂಡರ್ ಇರ್ಫಾನ್ ಪಠಾಣ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ:
ಇರ್ಫಾನ್ ಪಠಾಣ್ ಗೆ ಚಿತ್ರದ ಫಲಿತಾಂಶ